Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri ShankaraNarayana. Show all posts
Showing posts with label Sri ShankaraNarayana. Show all posts
ಶ್ರೀ ಕ್ರೋಡ ಶಂಕರನಾರಾಯಣ ದೇವಸ್ಥಾನ, ಶಂಕರನಾರಾಯಣ, ಕುಂದಾಪುರ ತಾ|
Shree Shankaranarayana Temple, Shankaranarayana, Kundapura TQ.



ನ್ನಡ ಕರಾವಳಿಯ ಸಪ್ತಕ್ಷೇತ್ರಗಳಲ್ಲಿ ಒಂದಾದ ಶಂಕರನಾರಾಯಣ ಕ್ಷೇತ್ರ ಅತ್ಯಂತ ಮಹತ್ವದ ಪುರಾತನ ಪೌರಾಣಿಕ, ಐತಿಹಾಸಿಕ ಹಿನ್ನಲೆಯುಳ್ಳ ಪ್ರಸಿದ್ಧ ಪವಿತ್ರ ಕ್ಷೇತ್ರವಾಗಿದೆ. ಉಡುಪಿಯಿಂದ 35 ಕಿಲೊಮೀಟರ್ ದೂರದಲ್ಲಿ ಹಾಗೂ ಕುಂದಾಪುರದಿಂದ ಸುಮಾರು 24 ಕಿ.ಮೀ ಪೂರ್ವಕ್ಕೆ ಶಂಕರನಾರಾಯಣವಿದೆ. ಈ ಸ್ಥಳಕ್ಕೆ ಮೊದಲು ಗೋಳಿಕಟ್ಟೆ ಎಂಬ ಹೆಸರಿತ್ತು. ಕ್ರೋಢ ಋಷಿಯ ತಪೋಭೂಮಿಯಾಗಿತ್ತೆಂದು ಸ್ಥಳ ಪುರಾಣ ಹೇಳುತ್ತದೆ. ಅಂತೆಯೇ ಇದನ್ನು ಕ್ರೋಢಶಂಕರನಾರಾಯಣ ಎಂದು ಕರೆಯುವುದಿದೆ.
Sri Shankaranarayana Devaru
ಶಂಕರನಾರಾಯಣ(Shankaranarayana) ಕ್ಷೇತ್ರವು ಅತ್ಯಂತ ವಿಶಿಷ್ಟವಾದ ದೇವಸ್ಥಾನಗಳಲ್ಲಿ ಒಂದಾಗಿದೆ ಎಂದು ಆಸ್ತಿಕರು, ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ. ಇಲ್ಲಿ ಶಂಕರ ಮತ್ತು ನಾರಾಯಣ ದೇವರು ಸಮ್ಮಿಳಿತರಾಗಿ ಪೂಜಿಸಲ್ಪಡುತ್ತಿದ್ದಾರೆ. ದೇವಸ್ಥಾನದನ ಗರ್ಭಗೃಹದಲ್ಲಿ ನೆಲಮಟ್ಟಕ್ಕಿಂತ ಕೆಳಗೆ ಎರಡು ಉದ್ಬವ ಲಿಂಗರೂಪದಲ್ಲಿರುವ ಶಿವ ಮತ್ತು ವಿಷ್ಣುವನ್ನು ಆರಾಧಿಸುತ್ತಾರೆ. ಶಂಕರ ರೂಪಿ ಲಿಂಗವು ಗೋಲಾಕಾರವಾಗಿದ್ದರೆ - ನಾರಾಯಣ ಸ್ವರೂಪಿ ಲಿಂಗದ ನೆತ್ತಿಯ ಮೇಲೆ ಸಮತಟ್ಟಾಗಿದೆ.

ಮುಖಮಂಟಪ, Main Entrance
ಶಂಕರನಾರಾಯಣ ದೇವರು ಊರಿನ ಅಧಿದೇವರು. ಅಂತೆಯೇ ಈ ಊರು ಅದೇ ಹೆಸರಿನಿಂದ ಪ್ರಸಿದ್ಧವಾಗಿದೆ. ಈಗಿರುವ ಶಂಕರನಾರಾಯಣ ದೇವಾಲಯದ ಗರ್ಭಗುಡಿ ಎನ್ನಬಹುದಾದ ರಚನೆಯು ನೀರಿನ ನಡುವೆ ಶಿಲಾಮಯವಾಗಿ ನಿರ್ಮಿಸಲ್ಪಟ್ಟಿದೆ, ಇಲ್ಲಿರುವ ಉದ್ಭವಲಿಂಗದ ಸುತ್ತಲೂ ಸಿದ್ಧಾಮೃತ ತೀರ್ಥವಿದೆ. ಬಲದಲ್ಲಿ ಪರಶುರಾಮ ಸ್ಥಾಪಿಸದ ಎಂದೆನ್ನುವ ಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಭಾರ್ಗವ ತೀರ್ಥವಿದೆ. ದೇವಾಲಯದ ಮುಂಭಾಗದಲ್ಲಿ ಕೋಟಿತೀರ್ಥ ಎನ್ನುವ ವಿಶಾಲವಾದ ಕೆರೆ ಇದೆ.
ದೇವಸ್ಥಾನದ ಈಶಾನ್ಯ ದಿಕ್ಕಿನಲ್ಲಿರುವ ಸುಮಾರು 180 ಸೆ.ಮೀ ಎತ್ತರದ ಬೆಳ್ಳಿಯ ಶಂಕರನಾರಾಯಣ ಮೂರ್ತಿಯು ಅತ್ಯಂತ ಮಹತ್ವದ್ದಾಗಿದೆ. ಈ ದೇವಾಲಯವು ವಿಜಯನಗರದ ಅರಸರ ಕಾಲದಲ್ಲಿ ಪುನರ್ನಿರ್ಮಾಣಗೊಂಡು ದೊಡ್ಡ ಪ್ರಮಾಣದ ದತ್ತಿ, ದಾನ, ಕಾಣಿಕೆಗಳನ್ನು ಪಡೆದಿತ್ತು. ಮುಂದೆ ಕೆಳದಿ - ಇಕ್ಕೇರಿಯರಸರ ಕಾಲದಲ್ಲಿ ರಾಜಾಶ್ರಯದಿಂದ ತುಂಬಾ ಅಭಿವೃದ್ಧಿಯನ್ನು ಹೊಂದಿತ್ತು. ಸಾಮಾಜಿಕ ಸಾಮರಸ್ಯದ ತೀರ್ಥಕ್ಷೇತ್ರ ಶಂಕರನಾರಾಯಣ ಎಂದು ಜನ ನಂಬುತ್ತಾರೆ. ದೇವಸ್ಥಾನದ ಪಕ್ಕದ ಕ್ರೋಢಗಿರಿಯಲ್ಲಿ ಸುಮಾರು ಆರು ಅಡಿ ಅಗಲದ ಎರಡು ಅಡಿಯ ಪ್ರವೇಶ ದ್ವಾರವಿರುವ ಪುರಾತನ ಕ್ರೋಢ ಗುಹೆ ಇದೆ. ಹಿಂದೆ ಇದು ತಪೋಭೂಮಿಯಾಗಿತ್ತೆಂದು ಹೇಳುತ್ತಾರೆ. ಅದ್ಭುತವೆಂದರೆ ಈ ಪರ್ವತದ ನೆತ್ತಿಯ ಮೇಲೆ ಸದಾಕಾಲ ನೀರಿರುವ ಕ್ರೋಢತೀರ್ಥವಿದೆ.
ಶಂಕರನಾರಾಯಣ ದೇವಸ್ಥಾನದಲ್ಲಿ ಮಹಾಗಣಪತಿ, ಗೋಪಾಲಕೃಷ್ಣ, ಪಂಚಮುಖಿ ವೀರಾಂಜನೇಯ, ಪಾರ್ಥೇಶ್ವರ, ಗೌರಿ-ಲಕ್ಷ್ಮೀ, ಬೆಳ್ಳಿ ಶಂಕರನಾರಾಯಣ ದೇವರುಗಳ ಪೂಜಾ ಸ್ಥಾನಗಳಿವೆ. ಶಂಕರನಾರಾಯಣ ಎಂದು ಪೂಜಿಸಲ್ಪಡುವ ದೇವರು ಎರಡು ಉದ್ಬವ ಲಿಂಗದ ಸ್ವರೂಪದಲ್ಲಿವೆ. ಇವುಗಳನ್ನು ಚಿನ್ನದ ಮುಖವಾಡದಿಂದ ಅಲಂಕರಿಸಲಾಗುತ್ತದೆ. ದೇವಸ್ಥಾನದಲ್ಲಿರುವ ಚಿನ್ನದ ಪಾದುಕೆಗಳಲ್ಲಿರುವ ಉಂಗುಷ್ಠದಲ್ಲಿ ಬೆಲೆಬಾಳುವ ಕೆಂಪು ಹರಳುಗಳಿವೆ. ಇವು ಸುಮಾರು ಐನೂರು ವರ್ಷಗಳ ಹಿಂದೆ ರಾಜಮಾಹಾರಾಜರುಗಳು ಭಕ್ತಿಪೂರ್ವಕವಾಗಿ ನೀಡಿದ ಕಾಣಿಕೆಗಳಾಗಿವೆ.
Doddagante, ದೊಡ್ಡ ಗಂಟೆ

ಶಂಕರನಾರಾಯಣ ದೇವಸ್ಥಾನದ ದರ್ಬಾರ್ ಚಾವಡಿಯಲ್ಲಿ ಉಪ್ಪರಿಗೆಯಲ್ಲಿಟ್ಟಿರುವ ಪಟ್ಟಿಕೆಗಳಲ್ಲಿ ರೂಪಿಸಲ್ಪಟ್ಟ ಆಕರ್ಷಕ ಕಲಾಕೃತಿಗಳ ಕೆತ್ತನೆ ಅದ್ಬುತ ರಚನೆಗಳಾಗಿವೆ. ಇತಿಹಾಸ ಕಾಲದ ಕಲಾವಿದರ ಕಾಷ್ಠಕಲೆಯ ನೈಪುಣ್ಯತೆಗೆ ನಿದರ್ಶನವಾಗಿವೆ.
ಶಂಕರನಾರಾಯಣ ದೇವಸ್ಥಾನದಲ್ಲಿರುವ ವಿದೇಶಿ ನಿರ್ಮಿತ ಕಂಚಿನ ಭಾರಿ ಘಂಟೆ ಅತ್ಯಂತ ಆಕರ್ಷಣೆಯದಾಗಿದೆ. ಇಷ್ಟು ದೊಡ್ಡ ಗಾತ್ರದ ಗಂಟೆ ಬೇರೆಲ್ಲೂ ಇಲ್ಲ ಎಂದು ಬಲ್ಲವರು ಹೇಳುತ್ತಾರೆ. ಸುಮಾರು ಆರುನೂರು ಕೆಜಿ ಭಾರದ ಈ ಘಂಟೆಯನಾದ ಐದಾರು ಕಿಲೋ ಮೀಟರ್ ಸುತ್ತಳತೆಯಲ್ಲಿ ಕೇಳಿಸುತ್ತದೆ.
ನಗರ ಸಂಸ್ಥಾನವನ್ನು ಆಳುತ್ತಿದ್ದ ಬಿದನೂರು ಅರಸರು ಶಂಕರನಾರಾಯಣ ದೇವಸ್ಥಾನಕ್ಕೆ ನೀಡಿದ ಸುಮಾರು ಐದು ಅಡಿ ಉದ್ದ - ಎರಡುವರೆ ಅಡಿ ವ್ಯಾಸದ ಕುಸುರಿ ಕೆತ್ತನೆಯ ತಾಮ್ರದ ಕವಚದ ದೊಡ್ಡ ಭೇರಿ ರಾಜವೈಭವದ ಕಾಣಿಕೆಯ ಪಳೆಯುಳಿಕೆಯಾಗಿ ಇಲ್ಲಿದೆ. ದೊಡ್ಡ ನಗಾರಿ ಅಥವಾ ಡೋಲಿನಂತೆ ಕಂಡುಬರುವ ಈ ಭೇರಿಯನ್ನು ಬಾರಿಸುವುದಕ್ಕೆ ಬೇರಿ ತಾಂಡವ ಎನ್ನುತ್ತಾರೆ. ಈ ಭೇರಿಯನ್ನು ತ್ರಿಕಾಲ ಪೂಜೆಗೆ ಮತ್ತು ಉತ್ಸವದ ವೇಳೆ 12, 24, 36 ತಾಡನಗಳಿಂದ ಅನುರಣಗೊಳ್ಳುವ ಪದ್ದತಿ ಇತ್ತು. ಊರಿನ ಆಪತ್ತು-ವಿಪತ್ತು ಅನಾಹುತಗಳಿಗೆ ಸ್ಪಂದಿಸಲು ಈಗ ಭೇರಿಯ ಬದಲು ಭೀಮಕಾಯದ ಘಂಟೆ ಸೂರ್ಯನ ಉದಯ ಅಸ್ತಮಾನ ಹಾಗೂ ರಥಬೀದಿಯ ಮನೆಗಳಲ್ಲಿ ಸಾವು ಸಂಭವಿಸಿದಾಗ ದೇಗುಲದ ಪೂಜಾ ವೇಳೆಯ ವ್ಯತ್ಯಯ ತಿಳಿಸಲು ಈ ಘಂಟೆ ಢಣಢಣಿಸುತ್ತದೆ.
ಆರು ಕುಣಿಕೆಗಳ ಕಂಚಿನ ಈ ಘಂಟೆಯ ತೂಕವೇ ಸುಮಾರು 600 ಕೆಜಿ. ಭಾರತೀಯ ಸಂಪ್ರದಾಯಿಕ ರಚನೆಗಿಂತ ಭಿನ್ನವಾಗಿ, ಮೇಲ್ತುದಿ ಕೆಳತುದಿಗಳಲ್ಲಿ ಪಟ್ಟಿಯ ಕೆತ್ತನೆಯ ಪೋಚರ್ುಗೀಸ್ ಶೈಲಿಯ ಇಂಥದ್ದೊಂದು ಘಂಟೆ ಹಿಂದೂ ದೇಗುಲವೊಂದರಲ್ಲಿದೆ ಅನ್ನವುದೇ ಅಪೂರ್ವ ಸಂಗತಿ. ಲ್ಯಾಟೀನ್ ಬರಹ ಈ ಘಂಟೆಯಲ್ಲಿತ್ತೆಂದು ಉಲ್ಲೇಖವಿದ್ದರೂ (ಕರ್ನಾಟಕ ಸ್ಟೇಟ್ ಗಝಟಿಯರ್ : ಡಾ|| ಸೂರ್ಯನಾಥ ಕಾಮತ್) ಆ ಬರಹವೀಗ ಮಾಸಿದೆ. ಘಂಟೆ ಈ ದೇಗುಲಕ್ಕೆ ಬಂದಿರುವುದಕ್ಕೆ ಐತಿಹಾಸಿಕ ಹಿನ್ನಲೆ ಇದೆ. ದಿಗ್ವಿಜಯಕ್ಕೆ ಹೊರಟಿದ್ದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್. ಎಲ್ಲೋ ಕೊಳ್ಳೆ ಹೊಡೆದ ಘಂಟೆಯನ್ನು ಶ್ರೀರಂಗ ಪಟ್ಟಣಕ್ಕೆ ತೆರಳುವ ದಾರಿಯನ್ನು ಎದುರಾದ ಶಂಕರನಾರಾಯಣಕ್ಕೆ  ಈ ಕ್ಷೇತ್ರದ ಪವಾಡಗಳಿಗೆ ಮನಸೋತು ಭಕ್ತಿಯ ಕುರುಹಾಗಿ ಶಂಕರನಾರಾಯಣನಿಗೆ ಇದನ್ನು ಸಮರ್ಪಿಸಿರಬೇಕು ಅಥವಾ ಶಂಕರನಾರಾಯಣದ ಘಾಟಿ ಏರಿಯೇ ಅವನ್ನು ಮೈಸೂರಿಗೆ ತೆರಳಬೇಕಿತ್ತು. ಕರಾವಳಿಯಲ್ಲಿ ಟಿಪ್ಪುವಿಗೆ ಭಾರೀ ತೂಕದ ಈ ಘಂಟೆಯನ್ನು ಕಡಿದಾದ ಏರುಹಾದಿಯಲ್ಲಿ ಸಾಗಿಸಲು ತಲೆನೋವಾಗಿರಬೇಕು. ಘಟ್ಟದ ತಡಿಯ ಈ ದೇವರಿಗೆ ಗೌರವ ನೆನಪಿನ ದ್ಯೋತಕವಾಗಿಯೂ ಈ ಘಂಟೆ ಸಲ್ಲಿಸಿರಬಹುದು. ಎರಡು ಶತಕಗಳ ಐತಿಹ್ಯ ಹೊತ್ತಿರುವ ಟೀಪೂ ನೀಡಿದ ಈ ಭವ್ಯ ಘಂಟೆ ಹಿಂದೂ - ಮುಸ್ಲಿಮ್ ಸಾಮರಸ್ಯಕ್ಕೊಂದು ಸಂಕೇತವಾಗಿದೆ.


ಅನೇಕ ಶಿಲಾ ಶಾಸನಗಳು ದೇವಾಲಯದ ಆವರಣದಲ್ಲಿ ಹಾಗೂ ಸುತ್ತಮುತ್ತಲೂ ಇವೆ. ದೇವಸ್ಥಾನದಲ್ಲಿ ಪೂಜೆ ಮಂಗಳಾರತಿ ಆಗುವಾಗ ದೀವಟಿಗೆ ಹಿಡಿದವರು ನೆಲಮುಟ್ಟಿ ಸಲಾಂ ಮಾಡಿ, ಸಲಾಂ ಮಂಗಳಾರತಿಯ ಆರಾಧನೆ ನಡಿಸಿಕೊಡುವ ಪದ್ದತಿ ಇಲ್ಲಿದೆ. ಮಕರ ಸಂಕ್ರಾತಿಯಂದು ಹರಕೆ ಹೊತ್ತವರು ಹಿಮ್ಮುಖವಾಗಿ ಪ್ರದಕ್ಷಿಣೆ ಬರುವ ಕಂಚುಳ್ಳಿ ಸೇವೆ ಇಲ್ಲಿಯ ವಿಶೇಷ. ಶಂಕರನಾರಾಯಣ ನಿಸರ್ಗ ರಮಣೀಯ ಪರಿಸರ - ದೇವಸ್ಥಾನದ ಸುತ್ತಲೂ ಪರ್ವತ ಶ್ರೇಣಿಯಿಂದ ಆವರಿಸಲ್ಪಟ್ಟಿದೆ. ಚಿತ್ತಾಕರ್ಷಕ ಕಾಷ್ಠಶಿಲ್ಪ ಕೆತ್ತನೆಯ ವೈಭವದ ಬೃಹತ್ತಾದ ಆರು ಚಕ್ರಗಳ ಸ್ಕಂದನ ರಥ ಇಲ್ಲಿ ನೋಡುವಂತದ್ದು.
ದೇವಸ್ಥಾನದಲ್ಲಿ ಚಂದನದ ದೇವ ದೇವತೆಗಳ ಕೆತ್ತನೆಯ ಕೌಶಲ್ಯ ಸೊಬಗಿದೆ. ಇವೂ ಇದೀಗ ಸೊರಗಿ ಕರಗುತ್ತಿವೆ. ದೇವಸ್ಥಾನದಲ್ಲಿ ಕೆಳದಿಯರಸ ಸೋಮಶೇಖರ ನಾಯಕ ಕಾಣಿಕೆಯಾಗಿ ನೀಡಿದ ದೇವರ ಎರಡು ಚಿನ್ನದ ಮುಖವಾಡ, ಬೆಳ್ಳಿಯ ಎರಡು ಕಾಲುದೀಪಗಳಿವೆ. ವಿಶೇಷ ರೀತಿಯಲ್ಲಿ ತಿಲಕದ ಮೂಲಕ ವಿವಿಧತೆ ತೋರುವ ಇಲ್ಲಿನ ಆರು ಅಡಿ ಎತ್ತರದ ಬೆಳ್ಳಿಯ ಶಂಕರನಾರಾಯಣ ವಿಗ್ರಹ ಹದಿನೈದನೆ ಶತಮಾನದ ಕೆಳದಿಯರಸನ ಕೊಡುಗೆಯಾಗಿದೆ.
ಶಂಕರನಾರಾಯಣ ದೇವರ ಬೆಳ್ಳಿಯ ಲಾಂಛನಗಳಾದ ಶಂಕರನ ನಂದಿ - ನಾರಾಯಣನ ಗರುಡ ಇಲ್ಲಿದೆ. ಇವು ಕೆಳದಿಯರಸರ ಕಾಣಿಕೆಗಳಾಗಿವೆ. ನೀರಿನಲ್ಲಿರುವ ಶಂಕರನಾರಾಯಣ ಮೂಲ ಲಿಂಗಗಳನ್ನು ಕನ್ನಡಿಯ ಮೂಲಕ ದರ್ಶನ ಮಾಡಿಸುತ್ತಾರೆ. ವಿಶೇಷವೆಂದರೆ ಇಲ್ಲಿ ಎತ್ತರದ ಗರ್ಭಗುಡಿ ಇಲ್ಲ, ಪಾಣೀಪೀಠವಿಲ್ಲ. ಶಿವಲಿಂಗಕ್ಕಿರುವ ರೇಖೆಗಳಾದ ಹೋಮಸೂತ್ತವಿಲ್ಲ. ನಂದಿಯಿಲ್ಲ. ತೀರ್ಥದ್ವಾರವಿಲ್ಲ. ನೆಲಮಟ್ಟದಲ್ಲಿ ಸುಮಾರು ಆರು ಇಂಚು ವ್ಯಾಸದ ಆಯತ ಪೀಠದಲ್ಲಿರುವ ಉಭಯ ಲಿಂಗಗಳನ್ನು ಕನ್ನಡಿಯ ಮೂಲಕ ದರ್ಶನ ಮಾಡಿಸುವ ವಿಶೇಷ ವ್ಯವಸ್ಥೆ ಇದೆ.
ಹಿಂದೆ ದಟ್ಟ ಕಾನನದ ಮಧ್ಯದಲ್ಲಿ ನಿಮರ್ಿತವಾದ ದೇಗುಲವಿದು. ಕರಾವಳಿಯ ಸಪ್ತ ಪರಶುರಾಮ ಕ್ಷೇತ್ರಗಳಲ್ಲಿ ಒಂದಾದ ಪುಣ್ಯಭೂಮಿ ಶಂಕರನಾರಾಯಣ ಆಸ್ತಿಕರಿಗೆ ಮಾತ್ರವಲ್ಲ - ನಿಸರ್ಗ ಪ್ರಿಯ ಪ್ರವಾಸಿಗರ ಪ್ರೀತಿಯ ಗಿರಿ-ಶಿಖರ, ಗವಿ-ಕಂದರ, ಹರಿಯುವ ನೀರ ತೊರೆಯಿಂದ ಕೂಡಿದ ಮಲೆನಾಡಿನ ಮಗ್ಗುಲ ದೇವಭೂಮಿ ಶಂಕರನಾರಾಯಣ ಸಂದರ್ಶಿಸಿ ಸಂತೃಪ್ತರಾಗಿರಿ.

“ಶ್ರೀ ಶಂಕರನಾರಾಯಣ ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ”

ವಿಳಾಸ :-
          ಶ್ರೀ ಶಂಕರನಾರಾಯಣ ದೇವಸ್ಥಾನ,
          ಶಂಕರನಾರಾಯಣ, ಕುಂದಾಪುರ – ತಾ||
          ಉಡುಪಿ – ಜಿಲ್ಲೆ || ಕರ್ನಾಟಕ.

ಹೆಚ್ಚಿನ ಮಾಹಿತಿಗೆ ದೇವಾಯಲದ ವೆಬ್ ಪುಟವನ್ನು ನೋಡಿ : http://www.shankaranarayana.org/